Slide
Slide
Slide
previous arrow
next arrow

ಜು.7ರಿಂದ ಯಕ್ಷಗಾನ‌ ರಂಗ ತರಬೇತಿ ಶಿಬಿರ

300x250 AD

ಸಿದ್ದಾಪುರ: ತಾಲೂಕಿನ ಯಕ್ಷಚಂದನ ದಂಟಕಲ್ ಇವರಿಂದ ಸಿದ್ದಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲೆ ಇವರ ಸಹಕಾರದೊಂದಿಗೆ ಜು.7ರಿಂದ ಪ್ರತಿ ಶನಿವಾರ ಮಧ್ಯಾಹ್ನ 2ರಿಂದ 4ಗಂಟೆಯವೆಗೆ ಸಿದ್ದಾಪುರದ ಸಿದ್ದಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲಾ ಸಭಾಂಗಣದಲ್ಲಿ ಯಕ್ಷಗಾನ ರಂಗತರಬೇತಿ ಶಿಬಿರ ಜರುಗಲಿದೆ.

ಜು.7ರಂದು ಮಧ್ಯಾಹ್ನ 2ಕ್ಕೆ ಶಿಬಿರವನ್ನು ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಉದ್ಘಾಟಿಸುವರು. ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ, ಕಲಾವಿದ ಅಶೋಕ ಭಟ್ಟ ಸಿದ್ದಾಪುರ, ಸತೀಶ ಹೆಗಡೆ ದಂಟಕಲ್, ಸುಜಾತಾ ದಂಟಕಲ್ ಉಪಸ್ಥಿತರಿರುತ್ತಾರೆ.
ಯಕ್ಷಗಾನ ಶಿಬಿರದ ಶಿಕ್ಷಕರಾಗಿ ನರೇಂದ್ರ ಹೆಗಡೆ ಅತ್ತಿಮುರುಡು ಹಾಗೂ ನಿತಿನ್ ಹೆಗಡೆ ದಂಟಕಲ್ ಕಾರ್ಯನಿರ್ವಹಿಸಲಿದ್ದಾರೆ. ಯಕ್ಷಗಾನ ತರಬೇತಿ ಪಡೆಯುವ ಆಸಕ್ತ ಹತ್ತು ವರ್ಷದ ಮೇಲ್ಪಟ್ಟ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಯಕ್ಷಚಂದನ ದಂಟಕಲ್ ಅಥವಾ ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವ್ಯವಸ್ಥಾಪಕರನ್ನು ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: Tel:+919448821204,Tel:+919380721906,Tel:+917022502679 ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top